ನಗರದ ಹೊಸಕೆರೆಹಳ್ಳಿಯ ಸುಂದರಮಹಲ್ ಕಲ್ಯಾಣ ಮಂಟಪದಲ್ಲಿ ಅಂದು ಮದುವೆಮನೆಯ ಸಡಗರ. ಸಂತಸ ತುಂಬಿದ ಮದುವೆಮನೆ ಕೆಲವೇ ಕ್ಷಣದಲ್ಲಿ ರಣರಂಗವಾಗಿ ಮಾರ್ಪಡುತ್ತದೆ. ಯಾವುದೊ ಕಾರಣಕ್ಕಾಗಿ ಮಲ್ಲಿಕಾರ್ಜುನ ಹಾಗೂ ವಿಷಕಂಠರ ನಡುವೆ ಮಾರಾಮಾರಿಯಾಗುತ್ತದೆ. ಕೆ.ಡಿ.ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ ನಡೆದ ಈ ಸನ್ನಿವೇಶವನ್ನು ಎಸ್.ಎಸ್ ಕಂಬೈನ್ಸ್ ಲಾಂಛನದಲ್ಲಿ ಡಿ.ರಾಜಕುಮಾರ್ ಅರ್ಪಿಸಿ, ದಿನೇಶ್ಗಾಂಧಿ ನಿರ್ಮಿಸುತ್ತಿರುವ ‘ಮಲ್ಲಿಕಾರ್ಜುನ ಚಿತ್ರಕ್ಕಾಗಿ ನಿರ್ದೇಶಕ ಎಸ್.ಮುರಳಿಮೋಹನ್ ಚಿತ್ರಿಸಿಕೊಂಡರು ಮಲ್ಲಿಕಾರ್ಜುನನ ಪಾತ್ರದಲ್ಲಿ ರವಿಚಂದ್ರನ್ ವಿಷಕಂಠನ ಪಾತ್ರದಲ್ಲಿ ಆಶೀಷ್ವಿದ್ಯಾರ್ಥಿ ಅಭಿನಯಿಸಿದ್ದರು. ಸೀತಾ, ಸದಾ, ರಮ್ಯಬಾರ್ನಾ, ಆದಿಲೋಕೇಶ್, ಹೇಮಾಚೌಧರಿ, ರಾಜುತಾಳಿಕೋಟೆ ಸುಚಿತ್ರ, ಪೂರ್ಣಿಮಾ ಸೇರಿದಂತೆ ಅನೇಕ ಕಲಾವಿದರು ಹಾಗೂ ಆರುನೂರು ಜನ ಸಹ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ರವಿಚಂದ್ರನ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ವಿಶೇಷ. ತಂದೆ - ಮಗ ಎರಡು ಪಾತ್ರವನ್ನು ಅವರೇ ನಿರ್ವಹಿಸುತ್ತಿದ್ದಾರೆ. ಸೀತಾ, ಸದಾ, ರಮ್ಯಬಾರ್ನಾ, ಆಶೀಷ್ವಿದ್ಯಾರ್ಥಿ, ಹೇಮಾಚೌಧರಿ, ಆದಿಲೋಕೇಶ್, ಎಂ.ಎನ್.ಲಕ್ಷ್ಮೀದೇವಿ, ರಾಜುತಾಳಿಕೋಟೆ, ಪೂರ್ಣಿಮಾ, ಸುಚಿತ್ರ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ನಿರ್ದೇಶಕರೇ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಎಸ್.ಎ.ರಾಜಕುಮಾರರ ಸಂಗೀತವಿದೆ. ಜಿ.ಎಸ್.ವಿ ಸೀತಾರಾಂ ರವರ ಛಾಯಾಗ್ರಹಣ ‘ಮಲ್ಲಿಕಾರ್ಜುನ ಚಿತ್ರಕ್ಕಿದೆ.